ಈ ವರ್ಷದ ಮಳೆ ಪರಿಸ್ಥಿತಿ: ರೈತರಿಗೆ ಆಶೀರ್ವಾದವೇ? ಅಥವಾ ಸವಾಲೇ?

ಕೃಷಿ ಜೀವನದ ನಿಜವಾದ ಚಿತ್ರ” ಭಾರತದಲ್ಲಿ ಮಳೆ ಕೃಷಿಯ ಜೀವನಾಡಿಯಾಗಿದೆ. ಪ್ರತೀ ವರ್ಷವೂ ಮಳೆ ಪರಿಸ್ಥಿತಿ ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಈ ವರ್ಷ ಮಳೆ ಸಾಮಾನ್ಯಕ್ಕಿಂತ ವಿಭಿನ್ನವಾಗಿ ವರ್ತಿಸುತ್ತಿದ್ದು, ಕೆಲ ಕಡೆ ಹೆಚ್ಚು ಮಳೆಯಾಗುತ್ತಿದ್ದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆ ಕಾಣಿಸುತ್ತಿದೆ. ಈ ಪರಿಸ್ಥಿತಿ ರೈತರಿಗೆ ಆಶೀರ್ವಾದವಾಗುತ್ತದೆಯೇ ಅಥವಾ ಸವಾಲಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ ಏಕೆಂದರೆ ರಾಜ್ಯದಲ್ಲಿ ಕೆಲವೆಡೆ ಒಳ್ಳೆ ಮಳೆ ಆಗುತ್ತಿದೆ ಕೆಲಕಡೆ Read more

ಅಫ್ಘಾನಿಸ್ತಾನದಲ್ಲಿ ರಕ್ತಪಾತ: ಕಾಬುಲ್ ದಾಳಿಗೆ ಭಾರತದ ಕಠಿಣ ಪ್ರತಿಕ್ರಿಯೆ

Kabul ನಗರದಲ್ಲಿ ಸಂಭವಿಸಿದ ಭಾರೀ ಸ್ಫೋಟದ ದೃಶ್ಯ – ಅಗ್ನಿಜ್ವಾಲೆಗಳು ಆಕಾಶ ಮುಟ್ಟಿದ ಕ್ಷಣ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ವಿಶೇಷವಾಗಿ ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬುಲ್‌ನಲ್ಲಿ ನಡೆದ ಭೀಕರ ದಾಳಿ ಜಾಗತಿಕ ಮಟ್ಟದಲ್ಲಿ ಆತಂಕವನ್ನು ಹುಟ್ಟಿಸಿದೆ. ಈ ಘಟನೆ ಮಾನವೀಯ ಮೌಲ್ಯಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.ಕಾಬುಲ್‌ನಲ್ಲಿ ಭೀಕರ ದಾಳಿ ನಡೆದಿದೆ ಜಗತ್ತಿನ ಹಲವಾರು ದೇಶಗಳಿಂದ ಖಂಡನೆ ವ್ಯಕ್ತವಾಗಿದೆಭಾರತ ಈ ದಾಳಿಯನ್ನು Read more

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಸೆ ದಿನದಿಂದ ದಿನಕ್ಕೆ ಹೆಚ್ಚಳ: ಪ್ರಯಾಣಿಕರಿಗೆ ತೊಂದರೆ

ಬೆಂಗಳೂರು, ಐಟಿ ಮತ್ತು ಉದ್ಯೋಗ ಕೇಂದ್ರವಾಗಿ ಖ್ಯಾತಿಯುಳ್ಳ ನಗರ. ಸಾವಿರಾರು ಕಂಪನಿಗಳು, ಸ್ಟಾರ್ಟ್‌ಅಪ್‌ಗಳು, ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಬೆಂಗಳೂರಿಗೆ ಬರುತ್ತಿದ್ದಾರೆ. ಈ ವೇಗದ ಬೆಳವಣಿಗೆೊಂದಿಗೆ, ನಗರದಲ್ಲಿ ಟ್ರಾಫಿಕ್ ಸಮಸ್ಯೆ ದೊಡ್ಡ ಗಂಭೀರತೆಯನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಮತ್ತಷ್ಟು ಹೆಚ್ಚು ಗಮನ ಸೆಳೆಯುತ್ತಿದೆ. ಇತ್ತೀಚೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪ್ರಯಾಣಿಕನು ತನ್ನ ಅನುಭವವನ್ನು ಹಂಚಿಕೊಂಡಿದ್ದು, 6.5 ಕಿಲೋಮೀಟರ್ ದೂರಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡನು ಎಂದು ತಿಳಿಸಿದ್ದಾರೆ. ಇದು Read more

Puneeth Rajkumar ಬರ್ತ್ ಡೇ: ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳ ಗೌರವ

ಮಾರ್ಚ್ 17 ಕನ್ನಡ ಚಿತ್ರರಂಗಕ್ಕೂ ಮತ್ತು ಅಭಿಮಾನಿಗಳಿಗೂ ಮರೆಯಲಾಗದ ದಿನ. ಏಕೆಂದರೆ ಇದೇ ದಿನ ಕನ್ನಡದ ಜನಪ್ರಿಯ ನಟ Puneeth Rajkumar ಅವರ ಜನ್ಮ ದಿನ. ಅಭಿಮಾನಿಗಳ ಪಾಲಿಗೆ ಇದು ಅತ್ಯಂತ ವಿಶೇಷ ದಿನವಾಗಿದ್ದು, ಚಿತ್ರರಂಗಕ್ಕೂ ಕೂಡ ಮಹತ್ವದ ದಿನವಾಗಿದೆ. ಪುನೀತ್ ರಾಜ್ ಕುಮಾರ್ ಬದುಕಿದ್ದ ಸಮಯದಲ್ಲಿ ಅವರ ಹುಟ್ಟುಹಬ್ಬದ ಮುನ್ನದ ದಿನವೇ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದ ಮುಂದೆ ಅಭಿಮಾನಿಗಳ ಸಾಗರವೇ ಕಾಣಿಸುತ್ತಿತ್ತು. ದೂರದೂರಿನಿಂದ ಬಂದ ಅಭಿಮಾನಿಗಳು ತಮ್ಮ Read more

ಇರಾನ್‌ನ 3 ಡೆಡ್ಲಿ ಕಂಡಿಷನ್‌ಗಳು! ಯುದ್ಧ ನಿಲ್ಲುತ್ತಾ?

ಕಳೆದ ಎರಡು ವಾರಗಳಿಂದ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಡ್ರೋನ್ ದಾಳಿ, ಮಿಸೈಲ್ ದಾಳಿ ಮತ್ತು ರಕ್ತಪಾತದಿಂದ ಪರಿಸ್ಥಿತಿ ಗಂಭೀರವಾಗಿದೆ.ಇದರಿಂದ ಇಡೀ ಜಗತ್ತಿನಲ್ಲಿ ಮತ್ತೆ ದೊಡ್ಡ ಯುದ್ಧ ಆರಂಭವಾಗುತ್ತದೆಯೇ ಎಂಬ ಭಯವೂ ಮೂಡಿದೆ. ಒಂದು ಕಡೆ ಇಸ್ರೇಲ್ ಮತ್ತು ಅಮೆರಿಕ ಶಾಂತವಾಗಿಲ್ಲ, ಇನ್ನೊಂದು ಕಡೆ ಕೆರಳಿರುವ ಇರಾನ್ ಕೂಡ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.ಸದ್ಯದ ವರದಿಗಳ ಪ್ರಕಾರ ಕಳೆದ 15 ದಿನಗಳಲ್ಲಿ ಇರಾನ್‌ನಲ್ಲಿ ಮಾತ್ರ 300 ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ.ಲೆಬನಾನ್‌ನಲ್ಲಿ Read more

“ಇರಾನ್ ಯುದ್ಧದ ಪರಿಣಾಮ: ಪೆಟ್ರೋಲ್, ಗೊಬ್ಬರ, ಸಿಮೆಂಟ್ ಬೆಲೆ ಏರಿಕೆ!”

ಇರಾನಿನ ಯುದ್ಧದಿಂದ ಪೆಟ್ರೋಲ್ ಡೀಸೆಲ್ ಗಿಂತ ಹೆಚ್ಚಾಗಿ ರೈತರು ಬಳಸುವ ಗೊಬ್ಬರ ಮನೆ ಕಟ್ಟಲು ಬಳಸುವ ಸಿಮೆಂಟ್ ಪ್ರತಿಯೊಬ್ಬರೂ ಬಳಸುವ ಪ್ಲಾಸ್ಟಿಕ್ ವಸ್ತು ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಎಮರ್ಜೆಸಿಗೆ ಬೇಕಾದ MRI ಸ್ಕ್ಯಾನಿಂಗ್ ಮೇಲು ಕೂಡ ಪ್ರಭಾವ ಬೀರುತ್ತದೆ. ಹಾಗೆ ಅದೆಲ್ಲಾ ದುಬಾರಿಯಾಗಬಹುದು ಅಥವಾ ಬಂದ್ ಆಗುವ ಅಪಾಯವೂ ಇದೆ. ಜಲಸಂದಿಯಿಂದ ಬರೋದು ಕೇವಲ ಪೆಟ್ರೋಲ್, ಡೀಸೆಲ್, ಗ್ಯಾಸ್ ಮಾತ್ರ ಅಲ್ಲ ದಿನ ನಿತ್ಯದ ಬಳಕೆಯ ಜಗತ್ತಿಗೆ ಬೇಕಾಗಿರುವ ಮುಖ್ಯ Read more

ಮಾರ್ಚ್ 28ಕ್ಕೆ IPL ಹಬ್ಬ ಮೊದಲ ಪಂದ್ಯ RCB Vs SRH

ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಆರಂಭಕ್ಕೆ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿ IPL 19ನೇ ಆವೃತ್ತಿಯ ಆರಂಭಿಕ ಪಂದ್ಯ ಮಾರ್ಚ್ 28ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವು ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ IPL ವಿಶ್ವದ ಜನಪ್ರಿಯ T20 Read more

Dhurandhar 2: movie release : ರಣವೀರ್ ಸಿಂಗ್ ಚಿತ್ರದ ಮೇಲೆ ಭಾರಿ ನಿರೀಕ್ಷೆ

ಬಾಲಿವುಡ್ ಸಿನಿ ಪ್ರೇಕ್ಷಕರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ Dhurandhar 2: The Revenge ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಣವೀರ್ ಸಿಂಗ್ ಅಭಿನಯದ ದುರಂದರ ದಿ ರಿವೆಂಜ್ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದ್ದು ಮಾರ್ಚ್ 18ಕ್ಕೆ ಸಿನಿಮಾದ ಪ್ರೀಮಿಯರ್ ಪ್ರದರ್ಶನ ಆರಂಭವಾಗಲಿದೆ ಎಂದು ಹೇಳಿದ್ದಾರೆ. ಈ ಸಿನಿಮವು ಸುಮಾರು 3 ಗಂಟೆ 55 ನಿಮಿಷವಿದ್ದು Read more

India vs New zealand T20 world final 2026 – ಭಾರತದ ಭರ್ಜರಿ ಗೆಲುವು.

2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಅದ್ದೂರಿಯಾಗಿ ನಡೆಯಿತು. ಈ ರೋಚಕ ಪಂದ್ಯದಲ್ಲಿ ಭಾರತ ತಂಡವು ಅದ್ಬುತ ಪ್ರದರ್ಶನ ನೀಡುತ್ತಾ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದಿದೆ. ಭಾರತದ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ. ಭಾರತ ತಂಡವು ಮೊದಲಿಗೆ ಬ್ಯಾಟಿಂಗ್ ಮಾಡಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು, ಹಾಗೆ ಭಾರತ ತಂಡದ ಓಪನಿಂಗ್ Read more

ಭಾರತ VS ನ್ಯೂಜಿಲೆಂಡ್ T20 ವಿಶ್ವಕಪ್ ಫೈನಲ್ 2026: ಯಾರು ಗೆಲ್ಲುತ್ತಾರೆ ಕಪ್ ?

2026ರ ಐಸಿಸಿ T20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ . ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಈ ಮಹತ್ವದ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತಿದ್ದಾರೆ. ಮೂರನೇ ಟಿ 20 ವಿಶ್ವಕಪ್ ನಿರೀಕ್ಷೆಯನ್ನು ಹೆಚ್ಚಿಸಿದ ಭಾರತ. ಹೌದು 2007 ರಲ್ಲಿ ಭಾರತ ತಂಡದ ನಾಯಕ ಎಂ ಎಸ್ ಧೋನಿ ಅವರ ನೇತೃತ್ವದಲ್ಲಿ ಮೊದಲ ಟಿ 20 ವಿಶ್ವಕಪ್ ಗೆದ್ದಿತ್ತು, ನಂತರ Read more